Friday, March 9, 2012
Sunday, February 12, 2012
ಅಲ್ಪನಿಗೆ ಐಸಿರಿ
ಈಗ ನಾನಿರುವ ಗ್ರೆನೋಬಲ್ಲಿನಲ್ಲಿ ಅಕ್ಷರಶ 'ಅಲ್ಪನಿಗೆ ಐಸಿರಿ' ಬಂದಿದ್ದಾಳೆ. ಅಲ್ಪನ - ಫ್ರೆಂಚ್ alp ಸರಣಿಯ ಬಸ್ಟಿಲ್ಲೇ ಬೆಟ್ಟದ- ಹತ್ತಿರ ಐಸಿರಿ - isere ನದಿ - ಬಂದ ಚಿತ್ರ ಇಲ್ಲಿದೆ :
Sunday, October 16, 2011
lock ಆಯುಕ್ತ
ಲೋಕಾಯುಕ್ತ ಪೋಲಿಸರು ಇಷ್ಟು ಜನರನ್ನು ಒಳಗೆ ಹಾಕ್ತಾ ಇರೋದನ್ನ ನೋಡಿದರೆ, ಅವರನ್ನು lock ಆಯುಕ್ತ ಪೋಲಿಸರು ಎಂದು ಕರೀಬೇಕು ಎನಿಸುತ್ತೆ...
Friday, October 14, 2011
Monday, September 19, 2011
ಸಾಹಿತ್ಯ ಸೇವೆಯಲ್ಲಿ ಹತ್ತಾರು ವರುಷ, ಇಂದು ಕಂಬಾರನಿಗೆ ಜ್ಞಾನಪೀಠದ ಹರುಷ
ಕನ್ನಡದ ಹೆಮ್ಮೆಯ ಕವಿ, ಕಾದಂಬರಿಕಾರ, ನಾಟಕಕಾರ ಚಂದ್ರಶೇಖರ ಕಂಬಾರರ ಮುಡಿ ಏರಿ ಜ್ಞಾನಪೀಠ ತನ್ನ ಹಿರಿಮೆ ಹೆಚ್ಚಿಸಿಕೊಂಡಿದೆ.
Thursday, September 15, 2011
ನಿರ್ಮಾಪಕರ ಸಂಘ ನಿಷೇಧ "ಏರಿದ್ದು" ತಪ್ಪಾ ?
ಗೊತ್ತಿಲ್ಲಾ .. ಆದರೆ ಅವರೇ ತಮ್ಮದು ತಪ್ಪಾಯ್ತು ಎಂದು ಪತ್ರ ಬರೆದಿದ್ದಾರೆ. ತಪ್ಪೊಪ್ಪಿಗೆಯ ಪತ್ರದಲ್ಲಿ ಹಲವಾರು ತಪ್ಪುಗಳಿವೆ... ಚುರುಮುರಿಯಲ್ಲಿ ನಾನು ನೋಡಿದ ಆ ಪತ್ರದಲ್ಲಿ ಲಾಜಿಕ್ ಅನ್ನುವುದೇನು ಇಲ್ಲ - "ಅವರು ನಿರ್ಮಿಸಿದದ ಚಿತ್ರಗಳಲ್ಲೇ ಲಾಜಿಕ್ ಇರೋಲ್ಲ, ಅವರು ವಿಧಿಸಿದ ಆ ನಿಷೇಧದಲ್ಲಿಯೂ ಯಾವುದೇ ಲಾಜಿಕ್ ಇರಲಿಲ್ಲ, ಈ ಪತ್ರದಲ್ಲಿ ಯಾಕಿರಬೇಕು?" ಅಂದಿರಾ ? ಅದೂ ಸರಿಯನ್ನಿ.
ಉಳಿದಿದ್ದೆಲ್ಲಾ ಹಾಳಾಗಿ ಹೋಗಲಿ, ಪತ್ರವನ್ನು ಒಂಚೂರು ಕನ್ನಡ ಗೊತ್ತಿರುವವರಿಂದ ಬರೆಸಿದ್ದರೆ...
ಹೇರಲಿ ಆರಲಿ ಕನ್ನಡ ಚಿತ್ರರಂಗದ ಬಾವುಟ ..
ಉಳಿದಿದ್ದೆಲ್ಲಾ ಹಾಳಾಗಿ ಹೋಗಲಿ, ಪತ್ರವನ್ನು ಒಂಚೂರು ಕನ್ನಡ ಗೊತ್ತಿರುವವರಿಂದ ಬರೆಸಿದ್ದರೆ...
ಇರಲಿ, ತಪ್ಪು ಮಾಡದವರು ಎಲ್ಲವ್ರೆ? ತಪ್ಪೇ ಮಾಡದವರು ಎಲ್ಲವ್ರೆ?. ಪತ್ರ ಬರೆದ ನಿರ್ಮಾಪಕರೂ ಕೂಡ ನಮ್ಮವರೇ ಆದ 'ಕನ್ನಡದ ಉತ್ತಮ ಸಂಪ್ರದಾಯಸ್ತ , ಸುಸಂಸ್ಕೃತ, ಗೌರವಸ್ತ ಸಾದ್ವಿ, ಸದ್ಗುಣ ಸಂಪನ್ನ, ಕಳಂಕ ರಹಿತ ಹಾಲಿನಂತ ಮನಸ್ಸುಳ್ಳವರ ಸಮಾನರಾದ' ಬಂಧುಗಳಲ್ಲವೇ ?
ಹೇರಲಿ ಆರಲಿ ಕನ್ನಡ ಚಿತ್ರರಂಗದ ಬಾವುಟ ..
Monday, September 5, 2011
ಅನ್ತಃಪುರ ಗೀತೆಗಳು
ಇವರು ಬೇಲೂರಿನ ಜಗತ್ಪ್ರಸಿದ್ಧ ಚನ್ನಕೇಶವ ದೇವಸ್ಥಾನದಲ್ಲಿ ನಿತ್ಯ ನಲಿಯುವ ಶಿಲಾಬಾಲಿಕೆಯರು. ಇವರ ಬಗೆಗೆ ದಾರ್ಶನಿಕ ಕವಿ ಡಿವಿಜಿ 'ಅನ್ತಃಪುರ ಗೀತೆಗಳು..' ಎಂಬ ಕವನ ಸಂಕಲನವನ್ನೇ ಪ್ರಕಟಿಸಿದ್ದಾರೆ. ಇದೇ ಸಂಕಲನದಿಂದ ಆಯ್ದ ಸಾಲುಗಳನ್ನು ಇಲ್ಲಿ ಅಡಿಬರಹಗಳಾಗಿ ಉಪಯೋಗಿಸಲಾಗಿದೆ. 'ಅನ್ತಃಪುರ ಗೀತೆಗಳು'ದ ಪ್ರಕಾಶಕರು ಕಾವ್ಯಾಲಯ, ಮೈಸೂರು.
'ಅನ್ತಃಪುರ ಗೀತೆಗಳು' ಧ್ವನಿ ಸುರುಳಿಯಲ್ಲೂ ಲಭ್ಯವಿದೆ. ಒಮ್ಮೆ ಕೇಳಿ ನೋಡಿ..
Subscribe to:
Posts (Atom)




































