Thursday, December 31, 2020

ಬೆಂಗಳೂರಿನ ನರಹರಿರಾಯರ ಗುಡ್ಡಕ್ಕೆ ದನಿಪಯಣ

ಈ #ದನಿಪಯಣ ಸಂಚಿಕೆಯಲ್ಲಿ ಬೆಂಗಳೂರಿನ ಹನುಮಂತ ನಗರದಲ್ಲಿರುವ ನರಹರಿರಾಯರ ಗುಡ್ಡಕ್ಕೆ ಹೋಗಿ, ಅದು ನೆನಪಿಸುವ ವಿಷಯಗಳ ಬಗ್ಗೆ ಮಾತನಾಡುತ್ತ ನಡೆಯಲಿದ್ದೇವೆ.


🔶 ನಾಡಪ್ರಭು ಕೆಂಪೇಗೌಡರ ಕಾಲದಲ್ಲಿ ಶಿವಾಲಯವಾಗಿದ್ದ ಇಲ್ಲಿನ ದೇವಸ್ಥಾನ ಈಗ ಕುಮಾರಸ್ವಾಮಿ ಗುಡಿಯಾಗಿ ಪ್ರಸಿದ್ಧವಾಗಿದೆ.



🔶 ಕಳೆದ ಶತಮಾನದ ಶುರುವಿನಲ್ಲಿ ಹೈಕೋರ್ಟ್ ಜಜ್ ಆಗಿದ್ದ ಶ್ರೀ ನರಹರಿರಾಯರು ಇಲ್ಲಿನ ಗುಡಿಯನ್ನು ನವೀಕರಿಸಿದ್ದರಿಂದ ಈ ಬೆಟ್ಟಕ್ಕೆ ನರಹರಿರಾಯರ ಗುಡ್ಡ ಎಂದೇ ಹೆಸರಾಗಿದೆ.



🔶 ಮೌಂಟ್ ಜಾಯ್ ಎಂದು ಅಧಿಕೃತ ಹೆಸರಿರುವ ಇದಕ್ಕೆ, ಕೆಲವು ತಮಿಳರು ಪೊನ್ನುಮಲೈ ಎಂದು ಹೆಸರು ಬದಲಿಸಲು ಸಂಚುಮಾಡಿದ್ದರು.

🔶 ಖ್ಯಾತ ಕರ್ನಾಟಕ ಸಂಗೀತ ವಿದುಷಿ ಬೆಂಗಳೂರು ನಾಗರತ್ನಮ್ಮನವರಿಗೂ ಈ ಬೆಟ್ಟಕ್ಕೂ ಏನು ಸಂಬಂಧ ಗೊತ್ತಾ?



🔶 ಸ್ತ್ರೀವಾದಿಯಾಗಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಬೆಂಬಲಿಗರಾಗಿ, ಸಂಘಟನಕಾರ್ತಿಯಾಗಿ ನಾಗರತ್ನಮ್ಮನವರ ಹೋರಾಟ, ಸಾಧನೆಗಳ ಬಗ್ಗೆ ನಿಮಗೆ ಗೊತ್ತಾ?


ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ:
  
https://anchor.fm/gururaj-kulkarni/episodes/ep-eodo1a

ಈ ಸಂಚಿಕೆ ಈಗ ವಿಡಿಯೋ ರೂಪದಲ್ಲಿಯೂ ಲಭ್ಯವಿದೆ: https://youtu.be/uRpm7qcleHk


ನಿಮಗೆ ಗೊತ್ತಿರೊ ಹಾಗೆ : *ದನಿಪಯಣ* ಪಾಡ್‌ಕಾಸ್ಟ್‌ ಕಾರ್ಯಕ್ರಮದ ಉದ್ದೇಶ ಶಾಲೆಯಲ್ಲಿ ಕಲಿಸದ, ಪಠ್ಯ ಪುಸ್ತಕಗಳಲ್ಲಿ ಇರದ ನಮ್ಮ ಊರು-ನಾಡುಗಳ ಕತೆ-ಇತಿಹಾಸ ತಿಳಿದುಕೊಳ್ಳೋದು ಮತ್ತು ಮಕ್ಕಳಿಗೆ ತಿಳಿಸುವುದು.
ಈ ಪಾಡ್‌ಕಾಸ್ಟ್‌ ಸಂಚಿಕೆಗಳು ರೇಡಿಯೋ-ಗಿರ್ಮಿಟ್ನಲ್ಲಿ (radiogirmit.com)  ಆಗಾಗ ಪ್ರಸಾರ ಆಗುತ್ತವೆ.

ದನಿಪಯಣ ದ ಹಿಂದಿನ ಸಂಚಿಕೆಗಳು ಗೂಗಲ್‌ಪಾಡ್‌ಕಾಸ್ಟ್ ನಲ್ಲಿ ಲಭ್ಯವಿವೆ: https://www.google.com/podcasts?feed=aHR0cHM6Ly9hbmNob3IuZm0vcy8xMTAwMTAyMC9wb2RjYXN0L3Jzcw==

ನಮ್ಮ ದನಿಪಯಣದ  ಸಂಚಿಕೆಗಳನ್ನು ಇತರ ಆಸಕ್ತರಿಗೆ ಫಾರ್ವರ್ಡ್ ಮಾಡಿ. 

No comments: